ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿಯವರಿಗೆ ಸನ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಜನವರಿ 20 , 2014
|
ಯಕ್ಷಗಾನಕ್ಕೆ ಪ್ರೇಕ್ಷಕರು ಕಡಿಮೆಯಾಗುತಿದ್ದು, ಮೇಳಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಲಾವಿದರ ಕೊರತೆಯಿಂದ ಮೇಳಗಳನ್ನು ನೆಡೆಸುವುದು ದುಸ್ಸಾಹಸದ ಕೆಲಸ ಎಂದು ಬೈಂದೂರು ಕ್ಷೇತ್ರದ ಶಾಸಕ ಗೋಪಾಲ ಪೂಜಾರಿಯವರು ಹೇಳಿದರು. ಅವರು ಕುಂದಾಪುರದಲ್ಲಿ ಪೆರ್ಡೂರು ಮೇಳದ ವೇದಿಕೆಯಲ್ಲಿ ನಡೆದ ಪ್ರಂಸಂಗಕರ್ತ ಕಂದಾವರ ರಘುರಾಮ ಶೆಟ್ಟಿಯವರ ಸನ್ಮಾನ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದರು.
ಅಭಿನ೦ದನಾ ಭಾಷಣ ಮಾಡಿ ಮಾತನಾಡಿದ ಮಣಿಪಾಲ ಎಂ. ಐ. ಟಿ. ಪ್ರಾದ್ಯಾಪಕ ಎಸ್. ವಿ. ಉದಯ ಕುಮಾರ ಶೆಟ್ಟರು ಇಂದು ಹೆಚ್ಚಿನ ಯುವಕರು ಪ್ರಸಂಗ ರಚನೆಯಲ್ಲಿ ತೊಡಗಿರುವುದು ಆಶಾದಾಯಕ ಬೆಳವಣಿಗೆಯಾದರೂ ಕಳೆದ 30 ವರ್ಷಗಳಿಂದ ಮೌಲ್ಯಾಧಾರಿತ ಉತ್ತಮ ಸಾಹಿತ್ಯ ಛಂದಸ್ಸಿನಿಂದ ಕೂಡಿದ ಪ್ರಸಂಗಗಳನ್ನು ಯಕ್ಷಗಾನ ಕ್ಷೇತ್ರಕ್ಕೆ ನೀಡುತ್ತಾ ಬಂದ ಕಂದಾವರ ರಘುರಾಮ ಶೆಟ್ಟರು ಯುವ ಪ್ರಸಂಗಕರ್ತರಿಗೆ ಆದರ್ಶಪ್ರಾಯರು ಎಂದು ಹೇಳಿದರು.
ಹೈದರಾಬಾದಿನ ಉದ್ಯಮಿ ಕೃಷ್ಣಮೂರ್ತಿ ಮಂಜ, ಮೂಡುಬಿದರೆಯ ಶಿಕ್ಷಣ ತಜ್ಞ ರಾಮಕೃಷ್ಣ ಆಚಾರ್ಯ, ಪೆರ್ಡೂರು ಮೇಳದ ವ್ಯವಸ್ಥಾಪಕ ವೈ. ಕರುಣಾಕರ ಶೆಟ್ಟಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುರೇಶ ಆಚಾರ್ಯ ಮಿತ್ರವೃ೦ದ ಕಾರ್ಯಕ್ರಮ ಆಯೋಜಿಸಿತ್ತು. ಪತ್ರಕರ್ತ ಪ್ರಭಾಕರ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ಸ೦ಯೋಜಿಸಿದರು. ಹಕ್ಲಾಡಿ ಸುರೇಶ ಆಚಾರ್ಯ ವಂದಿಸಿದರು.
ಬಳಿಕ ಕಲಾವಿದರಿಂದ ಕಂದಾವರದವರ ಈ ಸಾಲಿನ ನೂತನ ಪ್ರಸಂಗ ``ಮಾತ್ರದೇವೋಭವ`` ಪ್ರಸಂಗದ ಪ್ರದರ್ಶನ ನೆರವೇರಿತು.
|
|
|